Gummata Nagari

Bijapur

ಡಂಬಳ ತಾಂಡಾದಲ್ಲಿ ಗುಡಿಸಲಿಗೆ ಬೆಂಕಿ: ಆಡುಗಳ ಸಾವು

 

ಸಿಂದಗಿ: ತಾಲೂಕಿನ ಡಂಬಳ ತಾಂಡಾದಲ್ಲಿ ಕಾಂತವ್ವ ರಾಠೋಡ ಅವರ ತೋಟದಲ್ಲಿ ಗುಡಿಸಲಿಗೆ ಕರೆಂಟ್ ತಗುಲಿ ಬೆಂಕಿ ಹತ್ತಿ 17 ಕುರಿಗಳು ಸುಟ್ಟು ಕರಕಲಾಗಿವ ಘಟನೆ ಮಂಗಳವಾರ ರಾತ್ರಿ ನಡೆದಿದೆ.

ಸ್ಥಳಕ್ಕೆ ಪಶು ಸಂಗೋಪನಾ ಇಲಾಖೆಯ ತಾಲೂಕು ಅಧಿಕಾರಿ ಡಾಕ್ಟರ್ ಮಾರುತಿ ತಡವಲಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದೇ ಗ್ರಾಮದ ಸಂತೋಷ ಪಾಟೀಲ ಡಂಬಳ ಬಿಜೆಪಿ ಸಿಂದಗಿ ಮಂಡಲ ಅಧ್ಯಕ್ಷ ಭೇಟಿ ನೀಡಿ ಅವರ ಕುಟುಂಬಕ್ಕೆ ಆದಾಯದ ಒಂದು ಮೂಲವಾದ ಆಡುಗಳನ್ನು ಕಳೆದುಕೊಂಡ ಕುಟುಂಬದವರಿಗೆ ಧೈರ್ಯ ತುಂಬಿ ಸರ್ಕಾರದಿಂದ ಸಹಾಯಧನ ಮಂಜೂರು ಮಾಡಲು ಪ್ರಯತ್ನಿಸುತ್ತೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಹಾದೇವ ರಾಠೋಡ ರಾಜುಗೌಡ ಪಾಟೀಲ ಶರಣಗೌಡ ಪಾಟೀಲ ಮಹೇಶ ಹುರಕಡ್ಲಿ ಉಪಸ್ಥಿತರಿದ್ದರು.

ವರದಿ: ಇಸ್ಮಾಯಿಲ್ ಎಮ್ ಶೇಖ್

 

Most Popular

To Top
error: Content is protected !!