ಕಲಬುರಗಿ: ಕಲಬುರಗಿಯ ಶ್ರೀ ಶರಣಬಸವೇಶ್ವರ ಜಾತ್ರೆಯ ಅನ್ನದಾಸೋಹ ಕಾರ್ಯಕ್ರಮದಲ್ಲಿ ಬಿ.ಜೆ.ಪಿ. ರಾಜಕೀಯ ವ್ಯಕ್ತಿಗಳ ಬ್ಯಾನರ್ ಹಾಕಿ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆಗಿರುವುದರಿಂದ ಬಿ.ಜೆ.ಪಿ.ರಾಜಕೀಯ ನಾಯಕರ ಮೇಲೆ ಎಫ್.ಐ.ಆರ್. ಪ್ರಕರಣ ದಾಖಲಿಸಲಾಗಿದೆ.
ಕಲಬುರಗಿಯ ಶ್ರೀ ಶರಣಬಸವೇಶ್ವರ ಜಾತ್ರೆಯ ಅಂಗವಾಗಿ ಅನ್ನದಾಸೋಹ ಕಾರ್ಯಕ್ರಮವನ್ನು ಕಲಬುರಗಿ ದಕ್ಷಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಬ್ರಹ್ಮಪೂರದ ಕಲ್ಯಾಣಿ ಪೆಟ್ರೋಲ್ ಪಂಪ್ ಹತ್ತಿರ ಶ್ರೀ ಬಿ.ಜಿ. ಪಾಟೀಲ್ ಫೌಂಡೆಷನ್ ರವರು ಅನ್ನದಾಸೋಹದ ಬ್ಯಾನರ್ನಲ್ಲಿ ರಾಜಕೀಯ ವ್ಯಕ್ತಿಗಳ ಬ್ಯಾನರ್ ಹಾಕಿ ಶ್ರೀ.ಬಿ.ಜಿ.ಪಾಟೀಲ್ ಬಿ.ಜೆ.ಪಿ. ಪಕ್ಷದ ವಿಧಾನ ಪರಿಷತ್ ಸದಸ್ಯರು ಹಾಗೂ ಶ್ರೀ ಚಂದು ಪಾಟೀಲ್ ಬಿ.ಜೆ.ಪಿ ಪಕ್ಷದ ನಗರದ ಅಧ್ಯಕ್ಷರು ಹಾಗೂ ಇನ್ನಿತರರ ಭಾವ ಚಿತ್ರಗಳನ್ನು ಬ್ಯಾನರ್ ನಲ್ಲಿ ಹಾಕಿಕೊಂಡು ಶಾಮಿಯನ್ ಹಾಕಿಸಿ ಅನ್ನದಾಸೋಹ ಏರ್ಪಡಿಸಿ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಸಿರುವುದರಿoದ ಬ್ರಹ್ಮಪೂರ ಪೂಲೀಸ್ ಠಾಣೆಯಲ್ಲಿ ರಾಜಕೀಯ ನಾಯಕರ ಮೇಲೆ ಎಫ್.ಐ.ಆರ್. ಪ್ರಕರಣ ದಾಖಲಾಗಿರುತ್ತದೆ.