Gummata Nagari

Bijapur

ಬಿಜಾಪುರದಲ್ಲಿ ಸಿಡಿಲಿನ ಹೊಡೆತಕ್ಕೆ ಐತಿಹಾಸಿಕ ಸ್ಮಾರಕಕ್ಕೆ ದಕ್ಕೆ : ಕಾರು ಜಖಂ

 

ಬಿಜಾಪುರ: ಐತಿಹಾಸಿಕ ಬಿಜಾಪುರ ನಗರದಲ್ಲಿ ಇಂದು (ಗುರುವಾರ) ಸಂಜೆ ಮಳೆ ಸುರಿಯುವ ಸಂದರ್ಭದಲ್ಲಿ ಬಿರುಗಾಳಿಗಿಂತ ಸಿಡಿಲಿನ ಅಬ್ಬರ ಜೋರಾಗಿತ್ತು.
ಈ ಸಿಡಿಲಿನ ಭಾರಿ ಹೊಡೆತಕ್ಕೆ ನಗರದ ಜುಮ್ಮಾ ಮಸೀದಿ ರಸ್ತೆಯಲ್ಲಿ ಐತಿಹಾಸಿಕ  ಮೆಹತರ್ ಮಹಲ್ ಸ್ಮಾರಕದ ಒಂದು ಭಾಗದ ಮಿನಾರ್‌ನ ಗುಂಬಜ್ ಸಂಪೂರ್ಣ ಜಖಂ ಆಗಿದೆ.  ಪರಿಣಾಮ ಈ ಗೋಡೆಯ ಕೆಳಭಾಗದಲ್ಲಿ ಇದ್ದ ಒಂದು ಕಾರು 2 ಬೈಕ್ ಜಖಂಗೊoಡು ನುಜ್ಜುಗುಜ್ಜಾಗಿವೆ.

ಈ ಸಿಡಿಲಿನ ಹೊಡೆದ ಸಂದರ್ಭದಲ್ಲಿ ಮಳೆ ಬರುತ್ತಿತ್ತು. ಬಿರುಗಾಳಿ ರಭಸವಾಗಿ ಬೀಸುತ್ತಿತ್ತು. ಹೀಗಾಗಿ ಕಾರಿನ ಬಳಿಯಾಗಲಿ ಸ್ಮಾರಕದ ಬಳಿಯಾಗಲಿ ಯಾವುದೇ ವ್ಯಕ್ತಿ ಇರಲಿಲ್ಲ. ಹೀಗಾಗಿ ಯಾವುದೇ ರೀತಿಯ ಜೀವದ ಹಾನಿ ಆಗಿಲ್ಲ. ಆದರೆ ಈ ಸ್ಮಾರಕದ ಪಕ್ಕದಲ್ಲಿದ್ದ ಕಾರಿನ ಮೇಲೆ ಭಾರವಾದ ಕಲ್ಲುಗಳು ಬಿದ್ದ ಪರಿಣಾಮ ಕಾರು ಅಪ್ಪಚ್ಚಿಯಾಗಿದೆ. ಅದೃಷ್ಟವಶಾತ್ ಈ ಕಾರಿನಲ್ಲಿ ಯಾರು ಇರಲಿಲ್ಲ.
ಇದಲ್ಲದೆ 2 ಬೈಕ್ಗಳು ಈ ಗೋಡೆಯ ಹೊಡೆತಕ್ಕೆ ಜಖಂಗೊoಡಿವೆ. ಈ ಗೋಡೆ ಬಿದ್ದ ತಕ್ಷಣ ಭಾರಿ ಸದ್ದು ಉಂಟಾಗಿದೆ. ತಕ್ಷಣ ಸುತ್ತಲ ಮುತ್ತಲ ಇದ್ದ ಜನರು ಸ್ಥಳಕ್ಕೆ ಧಾವಿಸಿದ್ದಾರೆ. ಸಿಡಿಲಿನ ಹೊಡೆತಕ್ಕೆ ಎಂದು ಅದರದ ಗಟ್ಟಿಮುಟ್ಟಾದ ಆದಿಲ್ ಶಾಹಿ ಕಾಲದ ಗೋಡೆಗೆ ದೋಖಾ ಆಗಿರುವದು ಜನರಲ್ಲಿ ಆಶ್ಚರ್ಯ ಮೂಡಿಸಿದೆ.

ಇದರಿಂದಾಗಿ ಈ ಸ್ಥಳದಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಘಟನಾ ಸ್ಥಳಕ್ಕೆ ನಗರದ ಪೊಲೀಸರು ಧಾವಿಸಿ ವಾಹನ ಸವಾರರಿಗೆ ಅನುಕೂಲ ಕಲ್ಪಿಸಲು ಶ್ರಮಿಸಿದ ನೋಟ ಕಂಡುಬAದಿತು.

 

Most Popular

To Top
error: Content is protected !!