Gummata Nagari

Bijapur

ಕನ್ನೊಳ್ಳಿ: ಶ್ರೀ ದಾರುಕಾಚಾರ್ಯರ ಜಯಂತೋತ್ಸವ

 

ಬಿಜಾಪುರ: ಜಿಲ್ಲೆಯ ಸಿಂದಗಿ ತಾಲೂಕಿನ ಕನ್ನೊಳ್ಳಿ ಗ್ರಾಮದಲ್ಲಿ ಜಗದ್ಗುರು ದಾರುಕಾಚಾರ್ಯರ 110ನೇ ಜಯಂತೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಮೇ. 10 ರಿಂದ 12ರ ವರೆಗೆ ಆಯೋಜಿಸಲಾಗಿದೆ.
ಮೇ.10 ರಂದು ಬೆಳಿಗ್ಗೆ ಷಟಸ್ಥಲ ಧ್ವಜಾರೋಹಣ, ಸಂಜೆ 5ಕ್ಕೆ ಎತ್ತುಗಳ ಮೆರವಣಿಗೆ, 7 ಗಂಟೆಗೆ ಧರ್ಮ ಸಭೆ ಹಾಗೂ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ.
ಮೇ. 11 ರಂದು ಬೆಳಿಗ್ಗೆ 6ಕ್ಕೆ ಶ್ರೀ ಸಿದ್ಧಲಿಂಗೇಶ್ವರ ರಜತ ಮೂರ್ತಿಗೆ ಮಹಾರುದ್ರಾಭಿಷೇಕ, 9ಕ್ಕೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅಡ್ಡಪಲ್ಲಕ್ಕಿ ಉತ್ಸವ, ಸಂಜೆ 7.30ಕ್ಕೆ ಪುರಾಣ ಮಹಾಮಂಗಲೋತ್ಸವ ಜರುಗಲಿದೆ.
ಮೇ 12 ರಂದು ಜಂಗಮ ವಟುಗಳಿಗೆ ಅಯ್ಯಾಚಾರ, ರಜತ ಕಳಶಾರ್ಪಣೆ, ಬೆಳಿಗ್ಗೆ 9ಕ್ಕೆ ಡೊಳ್ಳಿನ ಹಾಡಿಕೆ ಮೇಳ, ಸಂಜೆ 5ಕ್ಕೆ ಶ್ರೀ ದಾರುಕಾಚಾರ್ಯರ ಭವ್ಯ ರಥೋತ್ಸವ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.

 

Most Popular

To Top
error: Content is protected !!