ಕಾಳಗಿ: ತಾಲ್ಲೂಕಿನ ಬಿಜೆಪಿ ಹೆಬ್ಬಾಳ ಮಂಡಲ ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಬಸವರಾಜ ಕಂಠಿ ಕೋರವಾರ ಆಯ್ಕೆಯಾಗಿದ್ದಾರೆ.
ಶುಕ್ರವಾರ ಕೋರವಾರ ಗ್ರಾಮದ ಸ್ವಗ್ರಹದಲ್ಲಿ ಹಮ್ಮಿಕೊಂಡ ಬಿಜೆಪಿ ಸಾದಕ ಬಾದಕಗಳ ಚರ್ಚೆ ಕಾರ್ಯಕ್ರಮದಲ್ಲಿ ಚಿತ್ತಾಪುರ ತಾಲ್ಲೂಕು ಬಿಜೆಪಿ ಮಂಡಲ ಅಧ್ಯಕ್ಷ ಆದೇಶ ಪತ್ರ ನೀಡಿ ಅಧಿಕಾರ ನೀಡಿದರು.
ಈ ಸಂದರ್ಭದಲ್ಲಿ ಚಿತ್ತಾಪುರ ಬಿಜೆಪಿ ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ, ಕಲಬುರಗಿ ಬಿಜೆಪಿ ಚುನಾವಣಾ ಉಸ್ತುವಾರಿ ಶರಣಪ್ಪ ತಳವಾರ, ಬಿಜೆಪಿ ಗ್ರಾಮಂತರ ಅಧ್ಯಕ್ಷ ಬಸವರಾಜ ಬೆಣ್ಣೂರಕರ್, ಅನೀಲ ಜೋಷಿ ಕೋರವಾರ, ನಿಂಗಪ್ಪ ನಾಮದಾರ, ಜೈಭೀಮ ಚೇಂಗಟಿ, ಶ್ರೀಮಂತ ನಾಮದಾರ, ಸತೀಶ್ ಸುಲೇಪೆಟ್ ಸೇರಿ ಇತರರಿದ್ದರು.