ಬಿಜಾಪುರ: ಚುನಾವಣಾ ಕರ್ತವ್ಯಕ್ಕೆ ಬಂದಿದ್ದ ಅಧಿಕಾರಿ ಅಸ್ವಸ್ಥಗೊಂಡಿರುವAತಹ ಘಟನೆ ನಡೆದಿದೆ. ಚುನಾವಣಾ ಎಪಿಆರ್ಒ ರಮೇಶ ನಿಡಗುಂದಿ ಅಸ್ವಸ್ಥರಾದ ಅಧಿಕಾರಿ. ಕರ್ತವ್ಯಕ್ಕೆ ಹಾಜರಾಗಲು ನಗರದ ಸೈನಿಕ ಶಾಲೆಗೆ ಆಗಮಿಸಿದ್ದರು. ಹೈ ಶುಗರ್, ಹೈಬಿಪಿಯಿಂದ ಕುಸಿದು ಬಿದಿದ್ದಾರೆ.
ನಾಗಠಾಣ ವಿಧಾನಸಭಾ ವ್ಯಾಪ್ತಿಯಲ್ಲಿ ಕರ್ತವ್ಯಕ್ಕೆ ನೇಮಿಸಲಾಗಿತ್ತು. ಸೈನಿಕ ಶಾಲೆಯ ಆರೋಗ್ಯ ತಪಾಸಣಾ ಕೇಂದ್ರಲ್ಲಿ ಚಿಕಿತ್ಸೆ ನೀಡಲಾಗಿದ್ದು, ಜಿಲ್ಲಾಧಿಕಾರಿ ಅಧಿಕಾರಿಯ ಆರೋಗ್ಯ ವಿಚಾರಿಸಿದರು. ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ರವಾನಿಸಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.