Gummata Nagari

Headlines

ಮುಧೋಳ: ನೇಹಾ ಹತ್ಯೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆ

 

ಮುಧೋಳ: ನಗರದಲ್ಲಿ ವೀರಶೈವ ಲಿಂಗಾಯತ ಸಮಾಜ, ಹಿಂದೂಪರ ವಿವಿಧ ಸಂಘಟನೆಗಳು ಹಾಗೂ ಮಹಿಳಾ ಸಂಘಟನೆ ನೇತೃತ್ವದಲ್ಲಿ ನೇಹಾ ನಿರಂಜನಯ್ಯ ಹಿರೇಮಠ ಹತ್ಯೆ ಖಂಡಿಸಿ ಇಂದು (ಸೋಮವಾರದಂದು) ಬೃಹತ್ ಪ್ರತಿಭಟನೆ ಮಾಡಲಾಯಿತು.

ಬಸವೇಶ್ವರ ವೃತ್ತದಲ್ಲಿ ಜಮಾಯಿಸಿದ್ದ ನೂರಾರು ಕಾರ್ಯಕರ್ತರು ನೇಹಾಳ ಬರ್ಬರ್ ಹತ್ಯೆಯನ್ನು ಖಂಡಿಸಿ, ಆರೋಪಿಯನ್ನು ಗಲ್ಲು ಶಿಕ್ಷೆಗೆ ಒಳಪಡಿಸಬೇಕು. ಎಂದು ಸರಕಾರಕ್ಕೆ ಆಗ್ರಪಡಿಸಿ, ನಂತರ ಪ್ರತಿಭಟನೆಯು ಉತ್ತೂರ ಗೇಟ್ ಮಾರ್ಗವಾಗಿ ತಂಬಾಕ ಚೌಕ, ಗಾಂಧೀಜಿ, ಶಿವಾಜಿ, ಗಡದನ್ನವರ, ರನ್ನ ವೃತ್ತದವರೆಗೆ ಬೃಹತ್ ಮೆರವಣಿಗೆ ನಡೆಸಿ ನಂತರ ತಹಸೀಲ್ದಾರರಿಗೆ ಈ ಕುರಿತು ಮನವಿ ಸಲ್ಲಿಸಿದರು.

ಮುಖಂಡ ಮಹಾಲಿಂಗ ಗುಜ್ಜನ್ನವರ, ಗುರುಪಾದ ಕುಳಲಿ, ಈರಯ್ಯ ಗೋವಿಂದಪೂರಮಠ, ಮಹಿಳಾ ಸಂಘಟನೆಯ ಅಧ್ಯಕ್ಷೆ ಕಮಲಾ ಜೇಡರ, ಸುವರ್ಣಾ ಗುಡ್ಲಿ ಇತರರಿದ್ದರು.

Most Popular

To Top
error: Content is protected !!