Gummata Nagari

Bijapur

ಮುದ್ದೇಬಿಹಾಳ : ಅರೆಸೇನಾಪಡೆ ಪೊಲೀಸರಿಂದ ಪಥ ಸಂಚಲನ

 

ಮುದ್ದೇಬಿಹಾಳ: ಲೋಕಸಭೆ ಚುನಾವಣೆ ಹಿನ್ನೆಲೆ ಭದ್ರತೆಗಾಗಿ ಆಗಮಿಸಿರುವ ಅರೆಸೇನಾಪಡೆಯ ಸಶಸ್ತç ಯೋಧರು, ಮುದ್ದೇಬಿಹಾಳ ಮತ್ತು ತಾಳಿಕೋಟೆ ಠಾಣೆಗಳ ಪೊಲೀಸರು, ಗೃಹರಕ್ಷಕ ದಳದವರು ಇಂದು ಸಂಜೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಬ್ಯಾಂಡ್ ಸಮೇತ ಪಥ ಸಂಚಲನ ನಡೆಸಿ ಜಾಗೃತಿ ಮೂಡಿಸಿದರು.

 

ಬಸವನ ಬಾಗೇವಾಡಿ ಡಿವೈಎಸ್ಪಿ ಬಲ್ಲಪ್ಪ ನಂದಗಾವಿ, ಮುದ್ದೇಬಿಹಾಳ ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಮುದ್ದೇಬಿಹಾಳ ಪಿಎಸೈ ಸಂಜಯ್ ತಿಪ್ಪರೆಡ್ಡಿ, ತಾಳಿಕೋಟೆ ಪಿಎಸೈ ಮಹ್ಮದಗೌಸ್ ಘೋರಿ ನೇತೃತ್ವದಲ್ಲಿ, ಸಿಆರ್‌ಪಿಎಫ್ ಕಮಾಂಡಿಗ್ ಆಫೀಸರ್ ಜಾಯೆ ಪನ್ಸಾ ಮುಂದಾಳತ್ವದಲ್ಲಿ ತಂಗಡಗಿ ರಸ್ತೆಯ ಪಿಲೇಕೆಮ್ಮ ನಗರದಿಂದ ಪ್ರಾರಂಭಗೊoಡ ಪಥಸಂಚಲನವು ಬಸವೇಶ್ವರ ವೃತ್ತ, ಸರಾಫ್ ಬಜಾರ, ಕಿಲ್ಲಾ ಗಲ್ಲಿ , ಮೇಲಿನ ಓಣಿ, ಇಂದಿರಾ ಸರ್ಕಲ್, ಗ್ರಾಮದೇವತೆ ಕಟ್ಟೆ, ಲಕ್ಷಿö್ಮ ವೆಂಕಟೇಶ್ವರ ದೇಗುಲ, ಶಾರಾದದೇವಿ ಮಂದಿರ, ರಾಘವೇಂದ್ರ ರಾಯರ ಮಠ, ಸಂಗೋಳ್ಳಿ ರಾಯಣ್ಣ ವೃತ್ತ, ಅಂಬೇಡ್ಕರ್ ವೃತ್ತ ಮಾರ್ಗವಾಗಿ ಪೋಲಿಸ್ ಠಾಣೆಗೆ ಆಗಮಿಸಿ ಸಮಾರೋಪಗೊಂಡಿತು.

 

Most Popular

To Top
error: Content is protected !!