Gummata Nagari

Bijapur

ಚಹಾ, ಚೂಡಾ ಸವಿದ ರಮೇಶ ಜಿಗಜಿಣಗಿ

ಬಿಜಾಪುರ: ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಸಂಸದ ರಮೇಶ ಜಿಗಜಿಣಗಿ ಅವರು ತಮ್ಮ ಚುನಾವಣಾ ಪ್ರಚಾರದ ಒತ್ತಡದ ನಡುವೆಯೂ ನಗರದ ಬಬಲೇಶ್ವರ ನಾಕಾದ ಬಳಿಯ ಹೊಟೇಲ್ ಒಂದರಲ್ಲಿ ಜನಸಾಮಾನ್ಯರೊಂದಿಗೆ ಸಾಮಾನ್ಯರಾಗಿ ಚಹಾ,ಚೂಡಾ ಸವಿದು ಕೆಲ ಹೊತ್ತು ಅಲ್ಲಿದ್ದ ಜನರೊಂದಿಗೆ ಆತ್ಮೀಯವಾಗಿ ಬೆರೆತು ಮಾತನಾಡಿದರು.

ವ್ಯಕ್ತಿ ಎಷ್ಟೇ ಉನ್ನತ ಸ್ಥಾನದಲ್ಲಿದ್ದರೂ ತಾನು ಸಾಗಿ ಬಂದ ಹಾದಿ ಹಾಗೂ ಬೆಳೆಯಲು ಕೈ ಹಿಡಿದವರನ್ನು ಎಂದಿಗೂ ಮರೆಯಬಾರದು ಎನ್ನುವ ಮಾತಿನಂತೆ ಹಿರಿಯ ಸಂಸದ, ಜನಸಾಮಾನ್ಯರ ಎಂಪಿ ರಮೇಶ ಜಿಗಜಿಣಗಿ ಅವರು ತಮ್ಮ ಸುದೀರ್ಘ 45-50 ವರ್ಷಗಳ ರಾಜಕಾರಣದ ಹಾದಿಯಲ್ಲಿ ಎಪ್ಪಾ, ಕಾಕಾ, ಬಾಬಾ, ಅಣ್ಣಾ ಎನ್ನುತ್ತಲೇ ಹಿರಿಯ ಕಿರಿಯರೊಂದಿಗೆ ಆತ್ಮೀಯತೆಯಿಂದ ಬೆರೆತು ಅವರ ಕಷ್ಟಸುಖಗಳಿಗೆ ಸ್ಪಂದಿಸಿಸುತ್ತಾ ಬಂದಿರುವ ಸರಳ ಸಜ್ಜನಿಕೆಯ ರಾಜಕಾರಣಿ.

ಅವರು ಬುಧವಾರ ನಗರದಲ್ಲಿ ಚುನಾವಣಾ ಪ್ರಚಾರದ ಒತ್ತಡದಲ್ಲೂ ಕೊಂಚ ಬಿಡುವು ಮಾಡಿಕೊಂಡು ಬಬಲೇಶ್ವರ ನಾಕಾದ ಹೊಟೇಲ್ ನಲ್ಲಿ ಚಹಾಚೂಡಾ ಸವಿದರು. ನಂತರ ಅಲ್ಲಿದ್ದ ಜನರೊಂದಿಗೆ ತಮ್ಮ ಅವಧಿಯಲ್ಲಿ ಜಿಲ್ಲೆಯಲ್ಲಾದ ನಾನ ಅಭಿವೃದ್ಧಿ ಕಾರ್ಯಗಳನ್ನು ವಿವರಿಸುತ್ತಾ ಮುಂದಾಗಬೇಕಿರುವ ಕೆಲಸಗಳ ಬಗ್ಗೆಯೂ ಜನಾಭಿಪ್ರಾಯ ಸಂಗ್ರಹಿಸಿದರು.
ಅಲ್ಲದೇ ಕಳೆದ ಹತ್ತು ವರ್ಷಗಳ ಮೋದಿಯವರ ಆಡಳಿತದಲ್ಲಿ ಜನಸಾಮಾನ್ಯರಿಗಾಗಿ ಅನುಷ್ಠಾನಗೊಳಿಸಿರುವ ಕಾರ್ಯಕ್ರಮಗಳು, ಯೋಜನೆಗಳನ್ನು ಸಹ ಜನರಿಗೆ ಮನದಟ್ಟು ಮಾಡಿಕೊಟ್ಟು ಈ ಬಾರಿಯೂ ತಮಗೆ ಮತಾಶಿರ್ವಾದ ನೀಡಿ ವಿಕಸಿತ ಭಾರತದ ಸಂಕಲ್ಪ ಹೊಂದಿರುವ ನರೇಂದ್ರ ಮೋದಿಯವರ ಕೈ ಬಲಪಡಿಸಬೇಕು ಎಂದು ಮನವಿ ಮಾಡಿಕೊಂಡರು.
ಈ ವೇಳೆ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮಾಜಿ ಎಂಎಲ್ಸಿ ಅರುಣ್ ಶಹಾಪುರ, ಪಾಲಿಕೆ ಸದಸ್ಯ ರಾಹುಲ್ ಜಾಧವ ಸೇರಿದಂತೆ ಅನೇಕರು ಜಿಗಜಿಣಗಿ ಅವರಿಗೆ ಸಾಥ್ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ರಾಜು ಅನಂತಪುರ್ ಭೀಮ ಮಾಶಾಳ ವಿಜಯ ಜೋಶಿ ರಾಜೇಶ್ ತವ್ಸೆ ಶ್ರೀಕಾಂತ್ ಶಿಂದೆ ರೋಹನ್ ಅಪಟೆ ಅನಿಲ್ ಉಪ್ಪಾರ್ ಚನ್ನು ಚಿನಗುಂಡಿ ಗಂಗಾಧರ ಮಠ ವಿನಾಯಕ್ ಗೌಳಿ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.

Most Popular

To Top
error: Content is protected !!