Gummata Nagari

Bijapur

ಸಿಡಿಲು ಬಡಿದು 10 ಕುರಿಗಳು ಸಾವು

ದೇವರಹಿಪ್ಪರಗಿ: ಸಮೀಪದ ಚಿಕ್ಕರೂಗಿ ಗ್ರಾಮದ ರೈತ ಸುಬ್ಬರಾಯ ದುಂಡಪ್ಪ ನಾಟೀಕಾರ ಅವರ 10 ಕುರಿಗಳು ಸಿಡಿಲು ಬಡಿದು ಸಾವನಪ್ಪಿದ ಘಟನೆ ಜರುಗಿದೆ.
ಚಿಕ್ಕರೂಗಿ ಗ್ರಾಮದ ಹೊರವಲಯದಲ್ಲಿ ಬುಧವಾರ ಸಂಜೆ ಮಳೆ ಗಾಳಿಗೆ ಮರದ ಕೆಳಗೆ ಆಸರೆಗೆ ನಿಂತಾಗ ಸಿಡಿಲು ಬಡಿದು 10 ಕುರಿಗಳು ಅಸು ನೀಗಿವೆ. ಸುಮಾರು 2ಲಕ್ಷರೂ. ಬೆಲೆ ಬಾಳುವ ಕುರಿಗಳಾಗಿದ್ದು, ಸಿಡಿಲನ ಹೊಡೆತಕೆ ಅಸು ನೀಗಿವೆ. ಸುದ್ದಿ ತಿಳಿದ ತಕ್ಷಣ ಕಂದಾಯ ಇಲಾಖೆಯ ಸಹಾಯಕರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
ಪರಿಹಾರ ನೀಡಲು ಆಗ್ರಹ:
ಅಕಾಲಿಕ ಮಳೆ ಗಾಳಿಗೆ ಸಿಡಿಲು ಬಡಿದು ಸುಮಾರು 2 ಲಕ್ಷರೂ.ಬೆಲೆ ಬಾಳುವ 10 ಕುರಿಗಳನ್ನು ಕಳೆದುಕೊಂಡ ಬಡ ರೈತನ ಕುಟುಂಬಕ್ಕೆ ತಕ್ಷಣವೇ ಸರಕಾರ ಪರಿಹಾರ ನೀಡಬೇಕು. ಜೀವನಕ್ಕೆ ಆಸರೆಯಾಗಿದ್ದ ಎಲ್ಲ ಕುರಿಗಳು ಸಿಡಿಲಿನ ಹೊಡೆತಕ್ಕೆ ಬಲಿಯಾಗಿದ್ದು, ರೈತ ಸುಬ್ಬರಾಯ ನಾಟೀಕಾರ ಕಂಗಾಲಾಗಿದ್ದಾನೆ. ಅದಕ್ಕಾಗಿ ಸರಕಾರ ತಕ್ಷಣವೇರಿಶೀಲನೆ ನಡೆಸಿ ಸೂಕ್ತ ಪರಿಹಾರ ನೀಡಬೇಕೆಂದು ಚಿಕ್ಕರೂಗಿ ಗ್ರಾಮಪಂಚಾಯತಿ ಅಧ್ಯಕ ಸಿದ್ದಗೊಂಡಪ್ಪಗೌಡ ಪಾಟೀಲ, ಹಿರಿಯರಾದ ಹಣಮಂತ ಮುಳಜಿ, ಸಂತೋಷ ದೇಶಪಾಂಡೆ, ಮೌಲಾಲಿ ಕೆಂಗನಾಳ, ಶಿವಾನಂದ ಕಡಣಿ, ದಾದಾ ಸಿಂದಗಿ, ಅಶೋಕ ಕುಂಬಾರ ಸೇರಿದಂತೆ ಮತ್ತೀತರರು ಆಗ್ರಹಿಸಿದ್ದಾರೆ.

Most Popular

To Top
error: Content is protected !!