Gummata Nagari

Bijapur

ಸಂಯುಕ್ತ ಪಾಟೀಲ್ ಕೈ ಹಿಡಿದ ವೀಣಾ ಕಾಶಪ್ಪನವರ್

ಬಾಗಲಕೋಟೆ: ವೀಣಾ ಕಾಶಪ್ಪನವರ್ ಅವರಲ್ಲಿ ಮಡುಗಟ್ಟಿದ್ದ ಕೋಪ-ತಾಪ-ಹತಾಷ-ಬೇಸರ-ಮುನಿಸು ಮಾಯವಾದಂತಿದೆ. ಬಾಗಲಕೋಟೆ ಲೋಕಸಭಾ ಕ್ಷೇತ್ರದ ಟಿಕೆಟ್ ತಮಗೆ ನೀಡದೆ ಸಚಿವ ಶಿವಾನಂದ ಪಾಟೀಲ್ ಪುತ್ರಿ ಸಂಯುಕ್ತ ಪಾಟೀಲ್‌ಗೆ ನೀಡಿದ್ದಕ್ಕೆ ವೀಣಾ ತೀವ್ರ ಹತಾಷರಾಗಿದ್ದರು ಮತ್ತು ಮಾಧ್ಯಮಗಳ ಮುಂದೆ ತಮ್ಮ ನೋವನ್ನು ತೋಡಿಕೊಂಡಿದ್ದರು. ಸಂಯುಕ್ತ ಪರ ಪ್ರಚಾರ ಮಾಡಲು ಹೋಗುವುದಿಲ್ಲ ಅಂತ ಹಟ ಕೂಡ ಹಿಡಿದು ಕೆಲದಿನಗಳ ಕಾಲ ಬೆಂಗಳೂರಲ್ಲೇ ಉಳಿದುಬಿಟ್ಟಿದ್ದರು. ಅದರೆ ಅವರು ಮುನಿಸನ್ನು ಮರೆತು ಇವತ್ತು ಸಂಯಕ್ತ ನಾಮಪತ್ರ ಸಲ್ಲಿಸುವ ಮೊದಲು ನಡೆದ ಬೃಹತ್ ರ‍್ಯಾಲಿಯಲ್ಲಿ ಪಾಲ್ಗೊಂಡು ಕಾಂಗ್ರೆಸ್ ಪಾಳೆಯಲ್ಲಿ ಹರ್ಷ ಮೂಡಿಸಿದರು.
ತಮ್ಮ ಪತಿ ಮತ್ತು ಶಾಸಕ ವಿಜಯಾನಂದ ಕಾಶಪ್ಪನವರ್ ಮತ್ತು ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಠೋಡ್ ಅವರೊಂದಿಗೆ ವೀಣಾ ಜಿಲ್ಲಾಧಿಕಾರಿಗಳ ಕಚೇರಿಗೆ ನಡೆದು ಹೋಗುತ್ತಿರುವುದನ್ನು ನಾವಿಲ್ಲಿ ನೋಡಬಹುದು. ಸಂಯುಕ್ತ ಅವರಿಗೆ ವೀಣಾರನ್ನು ನೋಡಿ ಆಕಾಶದಲ್ಲಿ ತೇಲಾಡುವ ಅನುಭವ ಆಗಿರಬಹುದು. ಯಾಕೆಂದರೆ, ಬಾಗಲಕೋಟೆ ಕ್ಷೇತ್ರದಲ್ಲಿ ವೀಣಾ ಉಳಿದೆಲ್ಲ ಸ್ಥಳೀಯ ನಾಯಕರಿಗಿಂತ ಹೆಚ್ಚು ಪ್ರಭಾವಿ ಮತ್ತು ಜನಪ್ರಿಯರು.

Most Popular

To Top
error: Content is protected !!