Gummata Nagari

Bijapur

ಸಿಂದಗಿ ಪಟ್ಟಣದಲ್ಲಿ ಇಂದು ನಡೆದ ಶಾಂತಿಸಭೆ: ಸರ್ವಧರ್ಮಿಯರು ಭಾಗಿ

ಸಿಂದಗಿ: ಪಟ್ಟಣದ ಸಿಂದಗಿ ಪೊಲೀಸ್ ಠಾಣೆಯಲ್ಲಿ ಹೋಳಿ ಹುಣ್ಣಿಮೆ ಹಾಗೂ ರಂಜಾನ್ ಹಬ್ಬದ ನಿಮಿತ್ಯ ಇಂದು ಶಾಂತಿ ಸಭೆ ನಡೆಸಲಾಯಿತು.

ಈ ಸಭೆಯಲ್ಲಿ ಸಿಂದಗಿ ಪೊಲೀಸ್ ಠಾಣೆಯ ಪಿಎಸ್‌ಐ ಭೀಮಪ್ಪ ರಬಕವಿ ಮಾತನಾಡಿ, ಧರ್ಮಾಚರನೆಯ ಜೊತೆಗೆ ಸಮಾಜದಲ್ಲಿ ಶಾಂತಿ ಸಹಬಾಳ್ವೆ ಮುಖ್ಯ. ಆದ್ದರಿಂದ ಸರ್ವಧರ್ಮಿಯರು ಹೋಳಿ ಹಾಗೂ ರಂಜಾನ ಹಬ್ಬವನ್ನು ಶಾಂತಿಯುತವಾಗಿ ಆಚರಿಸಬೇಕು ಎಂದು ಮನವಿ ಮಾಡಿದರು.

ಈ ಸಭೆಯಲ್ಲಿ ಸಿಂದಗಿ ಪಟ್ಟಣದ ಎಲ್ಲಾ ಸಮಾಜದ ಮುಖಂಡರು ಅಪರಾಧ ವಿಭಾಗದ ಪಿಎಸ್ಐ ಅರವಿಂದ್ ಅಂಗಡಿ ಹಾಗೂ ಪಿಸಿ ಪರಸುರಾಮ ಗೋರವಗುಡಂಗಿ ಪಿಸಿ ಜಕ್ಕಪ್ಪ ಕೋರೆ, ಹಿಂದು ಹಾಗೂ ಮುಸ್ಲಿಂ ಬಾಂಧವರು ಭಾಗವಹಿಸಿದ್ದರು.

Most Popular

To Top
error: Content is protected !!