Gummata Nagari

Headlines

ಸುಮೈಯಾ ಮುಲ್ಲಾಗೆ ಘಟಿಕೋತ್ಸವದಲ್ಲಿ ಚಿನ್ನದ ಪದಕ ಪ್ರದಾನ

ಸುಮೈಯಾ ಮುಲ್ಲಾಗೆ ಘಟಿಕೋತ್ಸವದಲ್ಲಿ ಚಿನ್ನದ ಪದಕ ಪ್ರದಾನ

ಬಿಜಾಪುರ: ಇಲ್ಲಿನ ಸಿಕ್ಯಾಬ ಸಂಸ್ಥೆಯ ಲುಕ್ಮಾನ್ ಯುನಾನಿ ಮೆಡಿಕಲ್ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೆಂದ್ರದ ವಿದ್ಯಾರ್ಥಿನಿ ಸುಮೈಯಾ ಮುಲ್ಲಾ ಇವರು ಬಿಯುಎಂಎಸ್ ಅಂತಿಮ ವರ್ಷದ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಪಡೆದು ವಿಶೇಷ ಸಾಧನೆಗೈದ ನಿಮಿತ್ತ ನಿನ್ನೆ ಬೆಂಗಳೂರಲ್ಲಿ ಜರುಗಿದ ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾಲಯದ 26ನೇ ಘಟಿಕೋತ್ಸವದಲ್ಲಿ ಮಾನ್ಯ ಘನತೆವೆತ್ತ ರಾಜ್ಯಪಾಲರು ಮತ್ತು ವಿ.ವಿಯ ಕುಲಾಧಿಪತಿಗಳೂ ಆದ ಶ್ರೀ ಥಾವರಚಂದ್ ಗೆಹಲೋಟ್ ಇವರು ಚಿನ್ನದ ಪದಕ ಮತ್ತು ಪ್ರಮಾಣಪತ್ರವನ್ನು ಪ್ರದಾನ ಮಾಡಿದರು.
ಕಾಲೇಜಿನ ಕೀರ್ತಿ ಹೆಚ್ಚಿಸಿದ ಸುಮೈಯಾ ಮುಲ್ಲಾ ಇವರ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಶ್ರೀ ಎಸ್.ಎ.ಪುಣೆಕರ, ಪ್ರಧಾನ ಕಾರ್ಯದರ್ಶಿ ಶ್ರೀ ಎ. ಎಸ್. ಪಾಟೀಲ, ನಿರ್ದೇಶಕ ಶ್ರೀ ಸಲಾಹುದ್ದೀನ್ ಅಯೂಬಿ, ಡೀನ್ ಡಾ. ಅಕೀಲ್ ಖಾದ್ರಿ, ಪ್ರಾಚಾರ್ಯೆ ಡಾ. ಶಹನಾಜ್ ಬಾನು ಮತ್ತು ಕಾಲೇಜಿನ ಸಮಸ್ತ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Most Popular

To Top
error: Content is protected !!