ನಿಡಗುಂದಿ: ಬೇನಾಳ್ (ಎನ್ ಹೆಚ್) ಗ್ರಾಮದ ಈದ್ಗಾ ಮೈದಾನದಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಈ ವರ್ಷ ಬರಗಾಲದಿಂದ ಕಂಗೆಟ್ಟಿರುವ ರೈತರಿಗಾಗಿ ಉತ್ತಮ ಮಳೆ ಬೆಳೆ ಬಂದು ಸಂಕಷ್ಟಗಳು ನಿವಾರಣೆಯಾಗಲಿ ಎಂದು ಪ್ರಾರ್ಥನೆ ಮಾಡಲಾಯಿತು. ಗ್ರಾಮಸ್ಥರು ಶ್ರದ್ಧಾಭಕ್ತಿಯಿಂದ ರಂಜಾನ್ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ಪುಟ್ಟ ಮಕ್ಕಳು ಖುಷಿಖುಷಿಯಾಗಿ ಹೊಸ ಬಟ್ಟೆಯನ್ನು ತೊಟ್ಟು ಸಂಭ್ರಮಿಸಿದರು. ಪ್ರಾರ್ಥನೆಯ ನಂತರ ಎಲ್ಲಾ ಮುಸ್ಲಿಂ ಬಾಂಧವರು ಪರಸ್ಪರ ಶುಭಾಶಯ ವಿನಿಮಯ ಮಾಡಿದರು.
ಮೌಲಾನ ಹಫೀಜ್ ಮುದಸ್ಸಿರ್ ಬಿದರಕುಂದಿ ಹಬ್ಬದ ವಿಶೇಷ ಪ್ರಾರ್ಥನೆ ಮಾಡಿಸಿದರು.
ಈ ಸಂದರ್ಭದಲ್ಲಿ ಡಾ.ಕೆ.ಎಂ ಗುಡ್ನಾಳ, ದಾದಾ ಖಲಂದರ್ ಗುಡ್ನಾಳ, ಡಾ.ಉಸ್ಮಾನ್ ಪಟೇಲ್ ಗುಡ್ನಾಳ, ಮಕ್ತುಮ್ ಪಟೇಲ್ ಗುಡ್ನಾಳ, ಅಲ್ಲಾಭಕ್ಷ ಹು ಬೂದಿಹಾಳ ,ಇಮಾಮ್ ಸಾಬ್ ಮಹಿಬೂಬಸಾಬ ಮುಲ್ಲಾ, ಮಹಮ್ಮದ ಯಾಸೀನ್ ಇ ಮುಲ್ಲಾ, ಮಹಮ್ಮದ್ ಯೂಸುಫ ಇ ಮುಲ್ಲಾ, ಬಾಬುಸಾಬ ಅ ಬೂದಿಹಾಳ, ಹುಸೇನ್ ಸಾಬ್ ಬಿಳೆಕುದುರಿ, ಮೈಬೂಬ್ ಸಾಬ್ ಗಂಜ್ಯಾಳ, ರಜಾಕಸಾಬ್ ಸಾಲಿಮನಿ, ಗೌಸ್ ಮೋದಿನ್ ಬುರಾನಗೋಳ, ಅಲ್ಲಾಬಕ್ಷ ಬೂದಿಹಾಳ,ಬುಡ್ಡೇಸಾಬ ಬಿಳೆಕುದುರಿ, ಹುಸೇನ್ ಸಾಬ್ ಮೇಲಿನಮನಿ, ಮುಬಾರಕ್ ಚಪ್ಪರಬಂದ, ಮೈಬೂಬ್ ಸಾಬ್ ಬಿಳೆಕುದುರಿ, ಬಾಷೇಸಾಬ ಗಂಜ್ಯಾಳ, ಇಸ್ಮಾಯಿಲ್ ಚಪ್ಪರಬಂದ, ಮಖಬೂಲ್ ಸಾಬ್ ಬಿಳೆಕುದುರಿ, ಖಾಜೇಸಾಬ ಗಂಜ್ಯಾಳ, ಲಾಲಸಾಬ ಮ್ಯಾಗೇರಿ ,ರಫೀಕ್ ಬಿಜಾಪುರ್, ಮಹಮ್ಮದ್ ರಫೀಕ್ ಬಿಳೆಕುದುರಿ, ಬುಡ್ಡೇಸಾಬ ಸಾಲಿಮನಿ, ರಫೀಕ್ ಬಿಳೆಕುದುರಿ, ರಾಜು ಮುಲ್ಲಾ, ಬಾಬುಲಾಲ್ ಸಾಲಿಮನಿ, ಮೊಹಮ್ಮದ ರಫೀಕ್ ಸಾಲಿಮನಿ ಆತಿಫ್ ಗುಡ್ನಾಳ. ಆಯತ್ ಗುಡ್ನಾಳ. ಅತಾವುಲ್ಲ ಬಳಬಟ್ಟಿ ಸೇರಿದಂತೆ ಅನೇಕರು ಹಾಜರಿದ್ದರು.