ಬಿಜಾಪುರ: ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಮುಂಬರುವ ಲೋಕಸಭೆ ಚುನಾವಣೆಯ ಅಂಗವಾಗಿ ಬಿಜಾಪುರ ಮಹಾನಗರ ಪಾಲಿಕೆಯ ಕಾಂಗ್ರೆಸ್ ಪಕ್ಷದ ಚುನಾಯಿತ ಸದಸ್ಯರು ಹಾಗೂ ಪರಾಜಿತ ಅಭ್ಯರ್ಥಿಗಳ ಪೂರ್ವಭಾವಿ ಸಭೆ ಬುಧವಾರದಂದು ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಲೋಕಸಭೆ ಚುನಾವಣೆಯ ಅಭ್ಯರ್ಥಿಯಾದ ಶ್ರೀ ರಾಜು ಆಲಗೂರರವರು ಮಾತನಾಡಿ, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪರವಾದ ಅಲೆಯಿದೆ ರಾಜ್ಯದಲ್ಲಿ ಮುಖ್ಯಮಂತ್ರಿ ಸನ್ಮಾಶ್ರೀ ಶ್ರೀ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಸನ್ಮಾಶ್ರೀ ಶ್ರೀ ಡಿ.ಕೆ ಶಿವಕುಮಾರ ರವರ ಸಮರ್ಥ ನಾಯಕತ್ವದಲ್ಲಿ ಸುಭದ್ರ ಸರ್ಕಾರ ವಿದೆ. ರಾಜ್ಯ ಸರ್ಕಾರ ರಾಜ್ಯದ ಜನತೆಗೆ ನೀಡಿರುವ ಗ್ಯಾರಂಟಿ ಯೋಜನೆಗಳು ಜನರಿಗೆ ಅತ್ಯಂತ ಉಪಯುಕ್ತವಾಗಿದೆ. ಇದರಿಂದಾಗಿ ಜನರಲ್ಲಿ ಕಾಂಗ್ರೆಸ್ ಪರವಾದ ಒಲವು ಮೂಡಿದೆ ಈ ಸಂದರ್ಭದಲ್ಲಿ ಲೋಕಸಭೆಯ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಜಯ ಗಳಿಸಲಿದೆ. ಬಿಜಾಪುರ ಮಹಾನಗರ ಪಾಲಿಕೆಯ 35 ವಾರ್ಡಗಳಲ್ಲಿಯೂ ನಮ್ಮ ಪಕ್ಷದ ಚುನಾಯಿತ ಅಭ್ಯರ್ಥಿಗಳು ಮತ್ತು ಪರಾಜಿತ ಅಭ್ಯರ್ಥಿಗಳು ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಪ್ರತಿ ಮನೆ ಮನೆಗೂ ತಲುಪಿಸುವ ಕಾರ್ಯ ಮಾಡಬೇಕು ಈ ಮೂಲಕ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಗೆಲವಿಗಾಗಿ ಕೆಲಸ ಮಾಡಬೇಕು ಎಂದು ಹೇಳಿದರು.
ಸಭೆಯಲ್ಲಿ ನಗರ ಮತಕ್ಷೇತ್ರದ ಪರಾಜಿತ ಅಭ್ಯರ್ಥಿ ಶ್ರೀ ಅಬ್ದುಲ ಹಮೀದ ಮುಶ್ರೀಪ್, ಉಪ ಮಹಾಪೌರ ದಿನೇಶ ಹಳ್ಳಿ, ಜಮೀರ ಅಹ್ಮದ ಬಾಂಗಿ, ಅಬ್ದುಲ್ ರಜಾಕ ಹೊರ್ತಿ, ಆಸೀಪ್ ಶಾನೆವಾಲೆ, ಆರತಿ ಶಹಾಪುರ, ಅಪ್ಪು ಪುಜಾರಿ, ರಾಜು ಜಾಧವ, ರಾಜು ಚವ್ಹಾಣ, ಬಂದೇನವಾಜ ಬೀಳಗಿ, ರಪೀಕ ಖಾನೆ, ಮುಬಿನ್ ಇನಾಮದಾರ, ವಿದ್ಯಾರಾಣಿ ತುಂಗಳ, ಶರಣಪ್ಪ ಯಕ್ಕುಂಡಿ, ಜಾಫರ ಸುತಾರ, ಅಲ್ತಾಫ ಇಟಗಿ, ವಾಲು ಚವ್ಹಾಣ, ಸದ್ದಾಂ ಇನಾಮದಾರ, ಧನರಾಜ, ಶಬ್ಬೀರ ಪಾಟೀಲ, ಸಲಿಂ ಕಲಾದಗಿ, ಹಾಫೀಜ್ ಬಾಷಾ ಶಾರಫಾದೆ, ಮಿಲಿಂದ ಚಂಚಲಕರ, ಹಮೀದಾ ಪಟೀಲ, ಗರೀಶ ಇಟ್ಟಂಗಿ, ದೀಪಾ ಕುಂಬಾರ, ವಸಂತ ಹೊನಮೊಡೆ ಮುಂತಾದವರು ಉಪಸ್ಥಿತರಿದ್ದರು.