ಬಿಜಾಪುರ: ಜಿಲ್ಲಾ ಕೃಷಿಯೇತರ ಪತ್ತಿನ ಸಹಕಾರಿ ಸಂಘದ ಒಕ್ಕೂಟದ ಚುನಾವಣೆ ನಡೆಯಿತು. ಈ ಚುನಾವಣೆಯ ಹಲವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಗರ ಮತಕ್ಷೇತ್ರ ದಿಂದ ಪತ್ರಕರ್ತ ದೀಪಕ ಶಿಂತ್ರೆ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಆಡಳಿತ ಮಂಡಳಿ ಸದಸ್ಯ ಗುರುಶಾಂತ ನಿಡೋಣಿ, ಮಹಾನಗರ ಪಾಲಿಕೆ ಸದಸ್ಯ ರಾಜಶೇಖರ್ ಮಗ್ಗಿಮಠ, ಪರಶುರಾಮ ಚಿಂಚಲಿ, ಡಾ.ಸದಾಶಿವ ಪವಾರ, ನಬಿಸಾಬ್ ಕರ್ಜಗಿ, ಇಂಡಿ ತಾಲೂಕಾ ಮತಕ್ಷೇತ್ರ ದಿಂದ ರಾಜ್ಯ ಸಹಕಾರ ರತ್ನ ಪುರಸ್ಕೃತ ಶ್ರೀಮಂತ ಇಂಡಿ, ವಿಜಯಪುರ ಗ್ರಾಮೀಣ ಕ್ಷೇತ್ರದ ಬಸವರಾಜ ಬಂಡಿ, ಮುದ್ದೇಬಿಹಾಳ ತಾಲೂಕಾ ಮತಕ್ಷೇತ್ರದಿಂದ ಬಸವರಾಜ ಇಸ್ಲಾಂಪುರ, ಬಸವಣ ಬಾಗೇವಾಡಿ ಯಿಂದ ಸಿದ್ದಪ್ಪ ಬಾಳಗೊಂಡ,ಸಿAದಗಿ ಮತ ಕ್ಷೇತ್ರ ದಿಂದ ಡಾ. ರಾಮರಾವ ನಾಯಕ ಚಡಚಣ ಕ್ಷೇತ್ರ ದಿಂದ ಬಸವರಾಜ ಸಾವಕಾರ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಹಾಗೂ ಸಹಕಾರ ಸಂಘಗ¼ ಉಪನಿಬಂಧಕರಾದ ಎಸ್ ಕೆ ಭಾಗ್ಯಶ್ರೀ ಘೋಷಿಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೃಷಿಯೇತರ ಪತ್ತಿನ ಸಹಕಾರಿ ಸಂಘ: ಅವಿರೋಧವಾಗಿ ಆಯ್ಕೆ
By
Posted on