Gummata Nagari

Bijapur

ಪ್ರಚೋದನಕಾರಿ ಭಾಷಣ ಯತ್ನಾಳ ವಿರುದ್ಧ ದೂರು ದಾಖಲು

 

ಬಿಜಾಪುರ: ಪ್ರಚೋದನಕಾರಿ ಭಾಷಣ ಹಿನ್ನೆಲೆ ಬಿಜಾಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಹೈದರಾಬಾದ್‌ನ ಗೋಶಮಹಾಲ ಬಿಜೆಪಿ ಶಾಸಕ ಟಿ. ರಾಜಾಸಿಂಗ್ ವಿರುದ್ಧ ನಗರದ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದೆ ಎಂದು ಭಾರತ ಭಾವೈಕ್ಯತಾ ಮಂಚನ ಮುಖಂಡ ಮೊಹಮ್ಮದ್ ರಫಿಕ್ ಟಪಾಲ ಇಂಜನಿಯರ್ ತಿಳಿಸಿದರು.

ನಗರದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಕಳೆದ ಮಾರ್ಚ 4ರ ಸೋಮವಾರದಂದು ನಡೆದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಣೆ ವೇಳೆ ಈ ಇಬ್ಬರು ಶಾಸಕರು ಪ್ರಚೋದನಕಾರಿ ಭಾಷಣ ಮಾಡಿದ್ದರು ಎಂದರು.

ಹೈದರಾಬಾದ್‌ನ ಗೋಶಮಹಾಲ ಬಿಜೆಪಿ ಶಾಸಕ ಟಿ. ರಾಜಾಸಿಂಗ್ ಅಬ್ ಗಲಿ ಗಲಿ ಮೈ ಅಫ್ಜಲಖಾನ್, ಔರಂಗಜೇಬ ಹೈ.. ಇಸ್ ಲಿಯೇ ಅಬ್ ಗಲಿ ಗಲಿ ಮೇ ಶಿವಾಜಿ ಮಹಾರಾಜರ ಬನಾನ್ ಹೈ ಎಂದು ಭಾಷಣ ಮಾಡಿದ್ದರು. ಬಿಜಾಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಗರ್ ಮೇರಾ ಹಾತ್ ಮೇ ಹೋಂ ಮಿನಿಸ್ಟರ್ ರಹಾತೋ ಗೋಸ್ಕೆ ಎನ್ಕೌಂಟರ್ ಕರಕ್ಕೆ, ಏಕ್ ಬಿ ಪಾಕಿಸ್ತಾನ ಘಸರೇ ಬಾಹ್ ನಹಿ ಆನೇತಕ್   ಭಾರತ ಮಾತಾಕಿ ಜೈ..ಜೈ ಛತ್ರಪತಿ ಶಿವಾಜಿ ಮಹಾರಾಜ ಕರತಾ ತಾ ಎಂದು ಪ್ರಚೋದನಕಾರಿ ಭಾಷಣ ಮಾಡಿದ್ದರು ಎಂದು ದೂರಿದರು.

ಬಳಿಕ ಇನ್ನೊರ್ವ ಮುಖಂಡ ಎಂ.ಸಿ. ಮುಲ್ಲಾ ಹಾಗೂ ಸೋಮನಾಥ ಕಳ್ಳಿಮನಿ ಮಾತನಾಡಿ, ಈ ಕುರಿತು ಕಲಂ: 153, 506, 504, 505(2) ಐಡಿಸಿ ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ. ಈ ಕುರಿತು ಪೊಲೀಸ್ ಇಲಾಖೆ ಈ ಇಬ್ಬರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು. ಈ ಮೂಲಕ ಶಾಂತಿಯತೆಯನ್ನು ಕಾಪಾಡಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಭಾರತ ಭಾವೈಕ್ಯ ಮಂಚನ ಮುಖಂಡರಾದ ಅಬ್ದುಲ್ ರಜಾಕ್ ಹೋರ್ತಿ, ಗಂಗಾಧರ ಸಂಬಣ್ಣಿ, ಫಯಾಜ ಕಲಾದಗಿ, ಹಾಜಿ ಪಿಂಜರ್, ಮೊಹಮ್ಮದ್ ನಸೀಮ್ ರೋಜಿಂದರ್, ದಾದಾಪೀರ್ ಮುಜಾವರ್ ಹಾಗೂ ಶಕಿಲ್ ಗಡೇದ ಉಪಸ್ಥಿತರಿದ್ದರು.

 

Most Popular

To Top
error: Content is protected !!