ಸಿಂದಗಿ: ಈ ಬಾರಿ ನಡೆಯಲಿರುವ ಲೋಕಸಭಾ ಚುನಾವಣೆ-2024ರ ಹಿನ್ನೆಲೆಯಲ್ಲಿ ಸದಾಚಾರ ನೀತಿ ಸಂಹಿತೆ ಕಟ್ಟುನಿಟ್ಟಿನ ಪಾಲನೆಗೆ ಜಿಲ್ಲಾ ಚುನಾವಣಾಧಿಕಾರಿ ಟಿ. ಭೂಬಾಲನ್ ನಿರಂತರ ಚೆಕ್ಪೋಸ್ಟಗಳಿಗೆ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಿಂದಗಿ ತಾಲೂಕಿನ ಮೋರಟಗಿ ಹಾಗೂ ಆಲಮೇಲ ತಾಲೂಕಿನ ದೇವಣಗಾಂವ ಚೆಕ್ಪೋಸ್ಟಗಳಿಗೆ ಭೇಟಿ ಪರಿಶೀಲನೆ ನಡೆಸಿದರು. ಇದಲ್ಲದೆ
ಚೆಕ್ಪೋಸ್ಟಗಳಲ್ಲಿ ವಾಹನ ತಪಾಸಣೆ ಮಾಡಲಾದ ವರಾಹಿತಿಯನ್ನು ಪಡೆದುಕೊಂಡರು. ಅಲ್ಲದೇ ಸಿಸಿಟಿವಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಚೆಕ್ಪೋಸ್ಟ ಸಿಬ್ಬಂದಿಯನ್ನು ವಿಚಾರಣೆ ನಡೆಸಿದ, ಈ ಸಂದರ್ಭದಲ್ಲಿ ಸಿಂದಗಿ ತಹಸಿಲ್ದಾರ್ ಪ್ರದೀಪ ಕುಮಾರ ಹಿರೇಮಠ ಹಾಗೂ ಆಲಮೇಲ ತಹಸಿಲ್ದಾರ್ ಉಪಸ್ಥಿತರಿದ್ದರು.