Gummata Nagari

Bijapur

ಬಿಜಾಪುರ: ಸಚಿವ ಶಿವರಾಜ ತಂಗಡಿ ವಿರುದ್ಧ ಬಿಜೆಪಿ ಪ್ರತಿಭಟನೆ

ಬಿಜಾಪುರ: ದೇಶದ ಪ್ರಧಾನಿ ನರೇಂದ್ರ ಮೋದಿಜಿಯವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಸಚಿವ ಶಿವರಾಜ್ ತಂಗಡಗಿ ಅವರನ್ನು ಸಚಿವ ಸ್ಥಾನದಿಂದ ವಜಾ ಗೊಳಿಸುವಂತೆ ಆಗ್ರಹಿಸಿ ಬಿಜೆಪಿ ಯುವ ಮೋರ್ಚಾ ವತಿಯಿಂದ ನಗರದಲ್ಲಿ ಇಂದು ಪ್ರತಿಭಟನೆ ನಡೆಯಿತು.

ಮೋದಿ ಮೋದಿ ಎಂದು ಕೂಗುವ ಯುವಕರ ಕೆನ್ನೆಗೆ ಬಾರಿಸಿ ಎಂಬ ಅವಹೇಳನಕಾರಿ ಹೇಳಿಕೆ ಕೊಟ್ಟಿರುವ ತಂಗಡಗಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷರಾದ ಬಸವರಾಜ ಹೂಗಾರ ಮಾತನಾಡಿ, ಪ್ರಧಾನಿ ಮೋದಿ ವಿರುದ್ಧ ರಾಜ್ಯದ ಸಚಿವರು ಶಿವರಾಜ ತಂಗಡಗಿ ಅವರ ನೀಡಿದ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸುತ್ತೇವೆ. ಶಿವರಾಜ್ ತಂಗಡಿ ಅವರಿಗೆ ತಾಕತ್ತಿದ್ದರೆ ಪ್ರಧಾನಿ ಮೋದಿ ಅಭಿಮಾನಿಗೆ ಮುಟ್ಟಿ ನೋಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಂದು ವೇಳೆ ಶಿವರಾಜ ತಂಗಡಗಿ ಅವರ ಮೇಲೇ ಸೂಕ್ತ ಕ್ರಮ ಕೈಗೊಳ್ಳುಲು ಸರ್ಕಾರ ಹಿಂಜರಿದರೆ ಉಗ್ರ ಹೋರಾಟ ನಡೆಸಲಾಗುವದು ಎಂದು ಎಚ್ಚರಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲನಗೌಡ ಬಿರಾದಾರ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಾಕತ್ತು ಇದ್ದರೆ ಪ್ರಧಾನಿ ಮೋದಿ ಅವರ ವಿರುದ್ಧ ಹಗುರವಾಗಿ ನಾಲಿಗೆ ಹರಿಬಿಟ್ಟ ಶಿವರಾಜ ತಂಗಡಗಿ ಅವರಿಗೇ ತಕ್ಷಣಕ್ಕ ಸಚಿವಸ್ಥಾನದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದರು . ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈರಣ್ಣ ರೇವೂರ ಮಾತನಾಡಿ, ಅಬ ಕೀ ಬಾರ ಚಾರಸೋ ಘೋಷಣೆದೊಂದಿಗೆ ಮತ್ತೆ ಮೂರನೇಬಾರಿ ಪ್ರಧಾನಿಆಗಲಿದ್ದಾರೆ. ಇದನ್ನು ಮನಗೊಂಡು ಹತಾಶೆಯಿಂದ ಶಿವರಾಜ ತಂಗಡಗಿ ನಾಲಿಗೆ ಹರಿಬಿಟ್ಟಿದಾರೆ ಎಂದು ಟೀಕಿಸಿದರು. ನಂತರ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರಿಗೆ ಮನವಿ ಸಲ್ಲಿಸಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಳನಗೌಡ ಪಾಟೀಲ್ ಹಾಗೂ ಈರಣ್ಣ ರಾವುರ, ಯುವಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಅಶೋಕ ರಾಠೋಡ ಹಾಗೂ ರಾಘವೇಂದ್ರ ಕಾಪಸೆ, ರಾಜಕುಮಾರ್ ಸಗಾಯಿ, ಶಂಕರ ಹೂಗಾರ, ರವಿಚಂದ್ರ ಉಪ್ಪಲದಿನ್ನಿ, ರವಿ ಬಿರಾದಾರ, ಅರುಣ ನಾಯಕ, ಪ್ರೇಮ ಬಿರಾದಾರ, ಜಗದೀಶ ಸುಣಗದ, ರೋಹನ ಆಪ್ಟೆ, ಜ್ಯೋತಿ ಚವಾಣ, ನಗರ ಮಂಡಳಿ ಯುವ ಮೋರ್ಚಾ ಅಧ್ಯಕ್ಷರಾದ ಪ್ರವೀಣ ವಂದಾಲಮಠ್ ಜಿಲ್ಲೆಯ ಎಲ್ಲಾ ಮಂಡಲ ಯುವಮೋರ್ಚಾ ಅಧ್ಯಕ್ಷರು ಪ್ರಧಾನ ಕಾರ್ಯದರ್ಶಿಗಳು ಜಿಲ್ಲೆಯ ಯುವ ಮೋರ್ಚ ಪದಾಧಿಕಾರಿಗಳು ಕಾರ್ಯಕರ್ತರು ಪ್ರತಿಬಟನೆಯಲ್ಲಿ ಭಾಗವಹಿಸಿದ್ದರು.

Most Popular

To Top
error: Content is protected !!