Gummata Nagari

Bijapur

ಬಿಜಾಪುರ: ಬಿಜೆಪಿ ಜೆಡಿಎಸ್ ತೊರೆದು ಕಾಂಗ್ರೇಸ್ ಸೇರ್ಪಡೆ

 

ಬಿಜಾಪುರ: ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಇಂದು (ಮಂಗಳವಾರದoದು) ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ, ಸಕ್ಕರೆ, ಜವಳಿ ಮತ್ತು ಎಪಿಎಂಸಿ ಸಚಿವ ಶಿವಾನಂದ ಎಸ್. ಪಾಟೀಲ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಎಸ್. ಲೋಣಿ, ಬಿಜಾಪುರ ಲೋಕಸಭಾ ಅಭ್ಯರ್ಥಿ ರಾಜು ಆಲಗೂರ ಸಮ್ಮುಖದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿಕೊಂಡು ಪಕ್ಷಕ್ಕೆ ಸೇರ್ಪಡೆಗೊಂಡರು.

ಸೇರ್ಪಡೆಗೊAಡವರು: ಡಾ.ರಾಜೇಂದ್ರ ನಾಯಕ, ವಕೀಲರುಗಳಾದ ಆಸಿಫ್ ಮುಜಾವರ, ಮಹ್ಮದಪಟೇಲ ಬಗಲಿ, ಮೊಯುದ್ದೀನ ಪೀರಜಾದೆ, ಉಸ್ಮಾನ ಕುರಿ ಹಾಗೂ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರುಗಳಾದ ನಜೀರ ಬಗಲಿ, ರಾಜಅಹ್ಮದ ಬಗಲಿ, ದಾವಲ ಕೊರಬು, ಖಾದರ ಕೊರಬು, ಮುನಾಫ ಬಗಲಿ, ದಾದಾಪೀರ ನದಾಫ್, ಮೈಬೂಬ ಬಗಲಿ, ಯುಸೂಫ ಹೆಬ್ಬಾಳ, ಮಹ್ಮದಪಟೇಲ ಬಗಲಿ, ಸಾಜಿದ ಮುಲ್ಲಾ, ಜಾವೀದ ಅಪಘಾನ ಮುಂತಾದವರು.

 

Most Popular

To Top
error: Content is protected !!