ಬಿಜಾಪುರ: ವೇಗವಾಗಿ ಚಲಿಸುತ್ತಿದ್ದ ಗೂಡ್ಸ ಪಿಕಪ್ ವಾಹನ ರಸ್ತೆ ದಾಟುತ್ತಿದ್ದ ಪಾದಾಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಪಾದಾರಿಯು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ನಗರದ ಅಥಣಿ ಬೈ ಪಾಸ್ ಹಾಗೂ ಜಮಖಂಡಿ ಬೈ ಪಾಸ್ ನಡುವಿನ ರಿಂಗ ರೋಡ್ ನಲ್ಲಿ ಬುಧವಾರ ರಾತ್ರಿ ನಡೆದಿದೆ.
ಈ ಘಟನೆಯಲ್ಲಿ ನಗರದ ತೊರವಿ ರಸ್ತೆಯ ಲಿಡಕರ್ ಕಾಲನಿಯ ನಿವಾಸಿ ಅಟೋ ಚಾಲಕ ಉಮೇಶ ರಾಜು ಕಾಂಬಳೆ (೨೬) ಎಂಬುವರು ಸಾವನ್ನಪ್ಪಿದ್ದಾರೆ.
ಕೆ.ಎ.28 ಎಎ9352 ನಂಬರಿನ ಪಿಕಪ್ ವಾಹನ ಚಾಲಕ ತನ್ನ ವಾಹನವನ್ನು ಅಥಣಿ ಬೈಪಾಸ್ ಕಡೆಯಿಂದ ಜಮಖಂಡಿ ಬೈ ಪಾಸ್ ಕಡೆಗೆ ಹೋಗುವ ಸಲುವಾಗಿ ರಿಂಗ್ ರೋಡ್ ಮುಖಾಂತರ ಅತೀ ಜೋರಾಗಿ ನಿಷ್ಕಾಳಜಿಯಿಂದ ನಡೆಸಿಕೊಂಡು ಬರುತ್ತಿರುವಾಗ ರಿಂಗ್ ರೋಡ ಹತ್ತಿರ ರಸ್ತೆ ದಾಟುತ್ತಿದ್ದ ಉಮೇಶ ಕಾಂಬಳೆ (೨೬) ಈತನಿಗೆ ಹಾಯಿಸಿದ್ದಾನೆ.
ಈ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಉಮೇಶನನ್ನು ತುರ್ತು ಚಿಕಿತ್ಸೆಗಾಗಿ ನಗರದ ಬಿ.ಎಲ್.ಡಿ.ಇ. ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾದೆ ಸಾವನ್ನಪ್ಪಿದಾನೆ.
ಈ ಕುರಿತು ನಗರದ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.