ಇಂಡಿ: ಅವರು ನಗರದ ದಿ ಪ್ರೆಸಿಡೆನ್ಸಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಜರುಗಿತು.
ಅರಕೇರಿ ಅಲ್ಪಸಂಖ್ಯಾತ ಶಿಕ್ಷಣ ಇಲಾಖೆಯ ಪ್ರಾಚಾರ್ಯ ರೇಖಾ ಬಾರ್ಕಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮಹಿಳೆಯರು ಕುಟುಂಬ ಮತ್ತು ಸಮುದಾಯಗಳ ಬೆನ್ನೆಲುಬು.ತಮ್ಮ ಕುಟುಂಬಗಳಿಗೆ ಕಾಳಜಿ, ಬೆಂಬಲ ಮತ್ತು ಪೋಷಣೆಯನ್ನು ಒದಗಿಸಿ, ಮಕ್ಕಳ ವ್ಯಕ್ತಿತ್ವ ಬೆಳವಣಿಗೆಯಲ್ಲಿ ಅವರ ಪಾತ್ರ ಅನನ್ಯ ಎಂದರು.
ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಹೆಣ್ಣು ಮಕ್ಕಳು ಶಿಕ್ಷಣವನ್ನು ಮೊಟಕುಗೊಳಿಸಬಾರದು. ವಿಶ್ವದಲ್ಲಿಯೇ ವಿಶಿಷ್ಟ ಸಂಸ್ಕೃತಿ, ಸಂಪ್ರದಾಯ, ಪರಂಪರೆ ಮತ್ತು ಆಚರಣೆ ಹೊಂದಿರುವ ಭಾರತೀಯ ಸಾಂಸ್ಕೃತಿಕ ವೈಭವವನ್ನು ಇಂದಿನ ಯುವ ಮಹಿಳಾ ಪೀಳಿಗೆಗೆ ಮನವರಿಕೆ ಮಾಡಿಕೆuಟಿಜeಜಿiಟಿeಜಡಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯೆ ಡಾ.ಎಸ್ ಟಿ ಬೋಳರೆಡ್ಡಿ ಮಾತನಾಡಿ.ಮಹಿಳೆಯರು ಮನೆಯ ನಾಲ್ಕು ಕೋಣೆಗೆ ಸೀಮಿತರಾಗದೇ, ಶಿಕ್ಷಣ ಮತ್ತು ಸಮಾಜಮುಖಿ ಕೆಲಸ-ಕಾರ್ಯಗಳಲ್ಲಿ ತೆuಟಿಜeಜಿiಟಿeಜಡಗಿಸಿಕೆuಟಿಜeಜಿiಟಿeಜಳ್ಳಬೇಕು. ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ಕಲ್ಪಿಸಿ, ಉಜ್ವಲ ಭವಿಷ್ಯ ರೂಪಿಸಬೇಕು ಎಂದು ಹೇಳಿದರು.
ಕರ್ನಾಟಕ ಸಾವಿತ್ರಿಬಾಯಿ ಫುಲೆ ಸಂಸ್ಥೆ ಅಧ್ಯಕ್ಷೆ ಅಕ್ಕುಬಾಯಿ ನಾಯಕ, ಸುನಂದಾ ಪಾಟೀಲ, ಎಂ ಎ ಮುಲ್ಲಾ, ಸುಜಾತ ರೇಶ್ಮಿ, ಜ್ಯೋತಿ ಹಿರೇಮಠ, ಸಾವಿತ್ರಿ ಭಟ್, ಶರಣಮ್ಮ ಪಲ್ಕಿ, ಸುಷ್ಮಾ ಚೆನ್ನವೀರ, ಶಾರದಾ ತೊರವಿ, ಸಾವಂತ್ರವ್ವ ವಜ್ಜಲ, ಅಣ್ಣಪೂರ್ಣ ದೇಸಾಯಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ವಿ ಎಂ ಸಜ್ಜನ, ಪಿ ಆರ್ ಡೋನೂರ,ವಾಣಿಶ್ರೀ ಇರಬಾಶೆಟ್ಟಿ, ಡಾ ವಿಜಯಲಕ್ಷ್ಮಿ ಪವಾರ,ವಿನುತಾ ಪಾಟೀಲ, ವಾಣಿಶ್ರೀ ಬಂಡಿ, ಜಯಶ್ರೀ ಅಮೀನ್ಗಡ,ಪಿ ಎಂ ರೆಡ್ಡಿ,ರಿಯಾಜ್ ಫರೀದ್,ಶೋಭಾ ನಾವಿ, ಮಹಿಳಾ ಪ್ರತಿನಿಧಿಗಳಾದ ಸುರೇಖಾ ಗಿಣ್ಣಿ,ಶಾಂತಾ ಬೇನೂರ ಹಾಗೂ ಬಿಎಡ್ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.
ಕುಮಾರಿ ರಶ್ಮಿ ನೇಗಿನಾಳ,ಚೈತ್ರ ನೀಲಗಾರ, ನಿರೂಪಿಸಿದರು.ಕುಮಾರಿ ಛಾಯಾ ಲಮಾಣಿ,ಶ್ವೇತಾ ಪೂಜಾರಿ ಪ್ರಾರ್ಥಿಸಿದರು. ಕುಮಾರಿ ವೈಷ್ಣವಿ ನೀಲಗಾರ ಸ್ವಾಗತಿಸಿದರು. ಮಹಿಳಾ ಸಬಲೀಕರಣ ಘಟಕದ ಕಾರ್ಯಾಧ್ಯಕ್ಷರಾದ ಡಾ ಶ್ರೀಮತಿ ಶಾರದಾ ಮನುಮಿ ವಂದಿಸಿದರು.