Gummata Nagari

Bijapur

ತೋಟಕ್ಕೆ ಬೆಂಕಿ:  ಪರಿಹಾರಕ್ಕೆ ರೈತ ಸಂಘ ಆಗ್ರಹ

ನಿಡಗುಂದಿ: ತಾಲೂಕಿನ ಗೊಳಸಂಗಿ ಗ್ರಾಮದ ರೈತರಾದ ಮಾರುತಿ ಜಾಧವ ಅವರ ತೋಟಕ್ಕೆ ಇತ್ತಿಚಿಗೆ ಬೆಂಕಿ ಬಿದ್ದ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನಿಡಗುಂದಿ ತಾಲೂಕಾ ಘಟಕದ ಮುಖಂಡರು ತೋಟಕ್ಕೆ ಭೇಟಿ ನೀಡಿ ನಷ್ಟಗೊಂಡ ರೈತ ಕುಟುಂಬಕ್ಕೆ ಸಾಂತ್ವಾನ ಹೇಳಿದರು.

ಭೇಟಿ ನೀಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನಿಡಗುಂದಿ ತಾಲೂಕಾ ಅಧ್ಯಕ್ಷ ಡಾ ಕೆ..ಎಂ. ಗುಡ್ನಾಳ ಮಾತನಾಡಿ, ರೈತರೊಂದಿಗೆ ಏನೆಲ್ಲ ನಷ್ಟಗೊಂಡಿದೆ ಎಂದು ವೀಕ್ಷಣೆ ಮಾಡಲಾಗಿ ಅಪಾರ ಪ್ರಮಾಣದ ನಷ್ಟಗೊಂಡಿರುವುದು ಕಂಡುಬoತು ಅದರಲ್ಲಿ ಕಬ್ಬು, ಬಾಳೆ ಹಾಗೂ ತೆಂಗಿನ ಮರ ಸೇರಿದಂತೆ ಕೃಷಿಹೊಂಡದ ತಾಡಪತ್ರಿ, ಸ್ಪಿಂಕರ್ ಪೈಪ್ ಸುಟ್ಟು ನಷ್ಟಗೊಂಡಿರುವುದು ಕಂಡುಬAದಿದೆ, ಈ ಕುರಿತು ತಹಶಿಲ್ದಾರರ ಮೂಲಕ ಜಿಲ್ಲಾಡಳಿತಕ್ಕೆ ಹಾಗೂ ಸಂಬAಧಿಸಿದ ಅಧಿಕಾರಿಗಳಿಗೆ ಆಗ್ರಹಿಸುತ್ತೇವೆ, ಕೂಡಲೇ ನಷ್ಟಗೊಂಡ ರೈತರಿಗೆ ನಷ್ಟ ಪರಿಹಾರ ಕೊಡಬೇಕು ಎಂದರು.

ಈ ವೇಳೆ ಗೌರವಾಧ್ಯಕ್ಷ ಅಲ್ಲಾಭಕ್ಷ ಲಷ್ಕರಿ, ನಿಡಗುಂದಿ ಮಹಿಳಾ ಅಧ್ಯಕ್ಷ ಶಬಾನಾ ಮುಲ್ಲಾ, ಗೊಳಸಂಗಿ ಅಧ್ಯಕ್ಷ ಇಬ್ರಾಹಿಂಸಾಬ್ ಕಮತಗಿ, ಮುಖಂಡರಾದ ಇಮ್ತಿಯಾಜ್ ಹೆಬ್ಬಾಳ, ಶಾಂತವ್ವ ಪರಪ್ಪಗೋಳ, ಗೈನಮ್ಮ ವಾಲಿಕಾರ, ನೀಲಮ್ಮ ಗುಂಡಿನಮನಿ, ಸಲೀಮಾ ಚಪ್ಪರಬಂದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Most Popular

To Top
error: Content is protected !!