Gummata Nagari

Headlines

ಧೂಳಖೇಡ: ಲಕ್ಷಾಂತರ ಹಣ ದೋಚಿ ಪರಾರಿ

 

ಚಡಚಣ: ತಾಲೂಕಿನ ಧೂಳಖೇಡ ಗ್ರಾಮದಲ್ಲಿರುವ ಭೀಮಾಶಂಕರ ಸೌಹಾರ್ದ ಸಹಕಾರಿ ಸಂಘದಲ್ಲಿರುವ ಅಪಾರ ಪ್ರಮಾಣದ ಹಣ ದೋಚಿ ಪರಾರಿ ಯಾದ ಘಟನೆ ಬುಧವಾರ ರಾತ್ರಿ ನಡೆದಿದೆ.
ಬುಧವಾರ ತಡರಾತ್ರಿ ಧೂಳಖೇಡ ಗ್ರಾಮದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಇವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಭೀಮಾಶಂಕರ ಸೌಹಾರ್ದ ಸಹಕರಿ ಸಂಘದ ಕಚೇರಿಯಲ್ಲಿರುವ ೧೯.೫೪ ಲಕ್ಷ ಹಣ ದೋಚಿ ಕಳ್ಳರು ಪರಾರಿ ಯಾಗಿದ್ದಾರೆ ಎಂದು ಪೋಲೀಸರ ಮೂಲಗಳಿಂದ ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಳ್ಳರನ್ನು ಪತ್ತೆ ಹಚ್ಚಲು ಸ್ವಾನ ದಳದ ಮೂಲಕ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
ಈ ಕುರಿತು ಝಳಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Most Popular

To Top
error: Content is protected !!