Gummata Nagari

Headlines

ಚಿಂಚೋಳಿ ಬಿಜೆಪಿ ಮಂಡಲ ಉಪಾಧ್ಯಕ್ಷ ಸ್ಥಾನ ಇತರರಿಗೆ ನೀಡಿ: ರಟಕಲ್

 

ಕಾಳಗಿ: ಕಳೆದ ಮೂರು ವರ್ಷಗಳ ಕಾಲ ಚಿಂಚೋಳಿ ಬಿಜೆಪಿ ಮಂಡಲ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು ನನಗೆ ತೃಪ್ತಿ ಇದೆ. ಎರಡನೆ ಅವದಿಗೆ ಚಿಂಚೋಳಿ ತಾಲ್ಲೂಕು ಮಂಡಲ ಉಪಾಧ್ಯಕ್ಷರಾಗಿ ಮುಂದುವರಿಸುತ್ತಿರುವ ಪಕ್ಷದ ನಿರ್ಣಾಯಕ್ಕೆ ಗೌರವಿಸುತ್ತೆನೆ, ನನ್ನ ಸ್ಥಾನ ಇನ್ನೂಳಿದ ಕಾರ್ಯಕರ್ತರಿಗೆ ನೀಡಬೇಕು ಎಂದು ಬಿಜೆಪಿ ಧುರಿಣ ರಾಜಶೇಖರ ಗುಡದಾ ರಟಕಲ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ದಿನಗಳಲ್ಲಿ ಚಿಂಚೋಳಿ ಮಂಡಲ ಬಿಜೆಪಿ ಪಕ್ಷದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ನೂತನ ವ್ಯಕ್ತಿಗಳಿಗೆ ಪಕ್ಷದ ಜವಾಬ್ದಾರಿ ಹೆಗಲಿಗೆ ಹಾಕುವ ಕಾರ್ಯಕ್ಕೆ ಮಂದುವರೆದಿದ್ದು ಸಂತೋಷದ ಸುದ್ದಿ, ಅಧ್ಯಕ್ಷ ಸ್ಥಾನಕ್ಕೆ ನೂತನ ಸಾರತಿ ಆದರೆ ಉಪಾಧ್ಯಕ್ಷ ಸ್ಥಾನಕ್ಕೆ ನೂತನ ಸಾರತಿ ಮಾಡುವುದು ಸೂಕ್ತವಾಗಿದೆ, ಹಾಗೆ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಹುದ್ದೆ ದೊರಕಿಸದಾಗ ಮಾತ್ರ ಪಕ್ಷ ಬಲಿಷ್ಠವಾಗುತ್ತದೆ ಎಂಬುವುದಾಗಿ ಹೇಳಿದರು.

ಮೂರು ವಿಧಾನ ಸಭಾ ಚುನಾವಣೆಯಲ್ಲಿ ಕಾರ್ಯಕರ್ತರಂತೆ ಶ್ರಮವಹಿಸಿದ್ದೆನೆ. ಅದರಲ್ಲೂ ಮುಖ್ಯವಾಗಿ ಕಳೆದ ವಿಧಾನ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಗ್ರಾಮದ ಕಾರ್ಯಕರ್ತರ ಶ್ರಮವೇ ಎಂದರೂ ಅತಿಷಯೋಕ್ತಿಯಲ್ಲ. ಚಿಂಚೋಳಿ ಕಾಳಗಿ ಪಕ್ಷದ ನೀತಿ ನಿಯಮಗಳನ್ನು ಒಪ್ಪಿಕೊಂಡು ಸೇವೆಸಲ್ಲಿಸುತ್ತಿದ್ದೆನೆ. ಸೇವೆಯನ್ನು ಮೆಚ್ಚಿ ಡಾ.ಅವಿನಾಶ ಜಾಧವ ಬಿಜೆಪಿ ಪಕ್ಷದ ಅನೇಕ ಸ್ಥಾನಮಾನವನ್ನು ದೊರಕಿಸಿ ಕೊಟ್ಟಿದ್ದು ನಮ್ಮ ಭಾಗ್ಯವೆ ಸರಿ. ಪ್ರಚಲಿತ ಅವದಿಗೆ ನನ್ನನ್ನು ಆಯ್ಕೆಯ ಸ್ಥಾನಕ್ಕೆ ಇನ್ನೂಳಿದ ಕಾರ್ಯಕರ್ತರಿಗೆ ನೀಡಬೇಕು ಎಂದು ಅಧ್ಯಕ್ಷರು ಹಾಗೂ ಶಾಸಕರಿಗೆ ಆಗ್ರಹಿಸಿದರು.

Most Popular

To Top
error: Content is protected !!