ಬಿಜಾಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯಆರ್ಥಿಕ ಸಹಾಯದಲ್ಲಿ ಜಿಲ್ಲಾ ಕೇಂದ್ರ ಕಾರಾಗೃಹ ಸಮಿಪ ನಿರ್ಮಿಸಲಾಗುತ್ತಿರುವ ಎನ್.ಸಿ.ಸಿ. ನೂತನಕಟ್ಟಡಕ್ಕೆ ಕೈಗಾರಿಕೆ, ಮೂಲ ಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ರವಿವಾರ ಭೂಮಿ ಪೂಜೆ ನೆರವೇರಿಸಿದರು.
ಎನ್.ಸಿ.ಸಿಗೆ ಸೇರಿದ ಐದು ಎಕರೆ ಪ್ರದೇಶದಲ್ಲಿ 16000 ಚದುರ ಅಡಿ ಪ್ರದೇಶದಲ್ಲಿ ನೂತನಕಟ್ಟಡ ನಿರ್ಮಾಣವಾಗಲಿದ್ದು, ಒಂದು ಅಂತಸ್ತಿನ ಬಿಲ್ಡಿಂಗ್ಇದಾಗಿದೆ. ಒಂಬತ್ತು ತಿಂಗಳಲ್ಲಿ ಈ ಕಟ್ಟಡ ನಿರ್ಮಿಸುವ ಗುರಿಯಿದೆ.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಟಿ. ಭೂಬಾಲನ್, ಎಸ್ಪಿ ಋಷಿಕೇಶ ಸೋನಾವಣೆ, ಕನಲ್ಗಿರೀಶ್ ಶಿಂಧೆ, ಸಬ್ ಮೇಜರ್ ಜಿ. ಎನ್. ಕುರಂದಳೆ, ಬಿ.ಎಲ್.ಡಿ.ಇ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ. ಆರ್. ಬಿ. ಕೊಟ್ನಾಳ, ಸಂಸ್ಥೆಯಅಧೀಕ್ಷಕಎಸ್. ಎ. ಬಿರಾದಾರ(ಕನ್ನಾಳ), ಎಂಜಿನಿಯರ್ ಗಳಾದ ಆರ್. ಎಸ್. ಜಿರಲಿ, ಯು. ಎನ್. ಕರಡಿ, ಉಪಮೇಯರ್ ದಿನೇಶ ಹಳ್ಳಿ, ಡಾ. ಮಹಾಂತೇಶ ಬಿರಾದಾರ, ಸುರೇಶಘೊಣಸಗಿ ಮುಂತಾದವರು ಉಪಸ್ಥಿತರಿದ್ದರು.