Gummata Nagari

Headlines

ನದಾಫ್ ಸಂಘದ ಕ್ಯಾಲೆಂಡರ್ ಬಿಡುಗಡೆ

ನದಾಫ್ ಸಂಘದ ಕ್ಯಾಲೆಂಡರ್ ಬಿಡುಗಡೆ

ನಿಡಗುಂದಿ: ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ಕರ್ನಾಟಕ ರಾಜ್ಯ ನದಾಫ್/ಪಿಂಜಾರ ಸಂಘದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಈ ವೇಳೆ ಮಾತನಾಡಿದ ಜಿಲ್ಲಾ ಪ್ರತಿನಿಧಿಗಳಾದ ಬಿ.ಸಿ ನದಾಫ್ ರಾಜ್ಯ ಘಟಕದಿಂದ ಕಳುಹಿಸಲಾದ ಕ್ಯಾಲೆಂಡರ್ ಉತ್ತಮ ಮುದ್ರಣ ಹಾಗೂ ಉಪಯುಕ್ತ ಮಾಹಿತಿಗಳನ್ನು ಹೊಂದಿದೆ, 2024ನೇ ಸಾಲಿನ ನದಾಫ್ /ಪಿಂಜಾರ ಸಂಘದ ಕ್ಯಾಲೆಂಡರನ್ನು ಅನುಸರಿಸಿ ಸಮುದಾಯದ ಬಂಧುಗಳು ಸದುಪಯೋಗ ಪಡೆಯಬೇಕು ಎಂದರು.
ತಾಲೂಕಾ ಕೋಶಾಧ್ಯಕ್ಷ ಆರ್ ಎ ನದಾಫ್ ಮಾತನಾಡಿ ಸಂಘದ ಉದ್ದೇಶಗಳನ್ನು ಸಮುದಾಯದ ಜನರಿಗೆ ತಿಳಿಸಬೇಕು, ಪ್ರತಿಯೊಬ್ಬರೂ ಸಂಘದ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಬೇಕು, ಸಾಮಾಜಿಕ ಶೈಕ್ಷಣಿಕ ಹಾಗೂ ರಾಜಕೀಯವಾಗಿ ಹಿಂದುಳಿದ ಪಿಂಜಾರ ಸಮುದಾಯ ಜಾಗೃತಗೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕಾ ಅಧ್ಯಕ್ಷರಾದ ದಾವಲಮಲಿಕ ನದಾಫ್, ಉಪಾಧ್ಯಕ್ಷರಾದ ಶನೂರಬಾಬಾ ಜೈ ನದಾಫ, ಎಸ್ ಸಿ, ಎಸ್ ಡಿ ನದಾಫ್, ನದಾಪ್, ಹಸೇನಡೋಂಗ್ರಿ ರ ನದಾಫ, ಅಸ್ಲಂ ಶೇಖ, ,ಹೆಚ್ ಡಿ ನದಾಫ, ಎನ್ ಐ ಅರಳಿಗಿಡದ, ಪೀರಸಾಬ ಅ ನದಾಫ ಆಸಿಪ ಲಾ ನದಾಫ, ಎಲ್ ಹೆಚ್ ನದಾಫ, ದಾವುಲಸಾಬ ಮೌ ಹಡಲಗೇರಿ, ಶಮೀರ ಹಾ ನದಾಫ್, ಅಲ್ಲಿಸಾಬ ನದಾಫ ಇತರರು ಉಪಸ್ಥಿತರಿದ್ದರು.

Most Popular

To Top
error: Content is protected !!