ನೆರೆ ಹಾನಿ ವೀಕ್ಷಿಸಿದ ಜಿಲ್ಲಾಧಿಕಾರಿ
ಬೋತಗಿ, ಅಲ್ಲೂರ, ನಿಂಬೂರ, ಸಿತಾಳಗೇರ ಸೇರಿ 11 ಹಳ್ಳಿಗಳಲ್ಲಿ ಮಳೆಯಿಂದ ಹಾನಿ
ಬೀದರ : ಅತಿವೃಷ್ಠಿಯಿಂದಾಗಿ ತೊಂದರೆಗೆ ಸಿಲುಕಿದ ಹುಮನಾಬಾದ್ ತಾಲೂಕಿನ ಬೋತಗಿ, ಅಲ್ಲೂರ, ನಿಂಬೂರ ಮತ್ತು ಸಿತಾಳಗೇರ ಗ್ರಾಮಗಳಿಗೆ ಜಿಲ್ಲಾಧಿಕಾರಿ ರಾಮಚಂದ್ರನ್.ಆರ್ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಿಪರೀತ ಸುರಿದ ಮಳೆಯಿಂದಾಗಿ ಬೋತಗಿ-ಹಳ್ಳಿಖೇಡ್ ಮತ್ತು ಬೋತಗಿ-ಸಿತಾಳಗೇರಾ ಸೇತುವೆಗಳು ತುಂಬಿ ಹರಿಯುತ್ತಿರುವುದನ್ನು ಜಿಲ್ಲಾಧಿಕಾರಿಗಳು ವೀಕ್ಷಿಸಿದರು. ಸೇತುವೆ ತುಂಬಿ ಹರಿದು ಸಂಚಾರಕ್ಕೆ ತೊಂದರೆ ಉಂಟಾಗಿದ್ದನ್ನು ಜಿಲ್ಲಾಧಿಕಾರಿ ಗಮನಿಸಿದರು.
ಈ ಹಿಂದೆ 2016ರಲ್ಲಿ ಈ ರೀತಿ ವಿಪರೀತ ಮಳೆ ಸುರಿದಿತ್ತು ಎಂಬುದು ಈ ಭಾಗದ ಜನರ ಅಭಿಪ್ರಾಯವಾಗಿದೆ. ವಿಪರೀತ ಮಳೆ ಸುರಿದು ಈ ಭಾಗದ 11 ಹಳ್ಳಿಗಳಲ್ಲಿನ ರಸ್ತೆಗಳು ಕೆಟ್ಟು ಹೋಗಿವೆ. ಹೊಲಗಳಿಗೆ ನೀರು ಹರಿದು ಹಾನಿಯಾಗಿದೆ ಎಂದು ಇದೆ ವೇಳೆ ತಹಸೀಲ್ದಾರರು ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದರು.
ಶಾಸಕರೊಂದಿಗೆ ಚರ್ಚೆ: ಹುಮಾನಾಬಾದ್ ಶಾಸಕ ರಾಜಶೇಖರ ಪಾಟೀಲ ಅವರೊಂದಿಗೆ ಇದೆ ವೇಳೆ ಜಿಲ್ಲಾಧಿಕಾರಿ ಅತಿವೃಷ್ಟಿಯಿಂದಾದ ಹಾನಿಯ ಬಗ್ಗೆ ಚರ್ಚಿಸಿದರು.
ಶಾಸಕರಲ್ಲಿ ಮನವಿ: ಅತಿವೃಷ್ಠಿಯಾದಾಗ ಈ ರೀತಿ ಸೇತುವೆ ಮೇಲೆ ನೀರು ಬಂದು ಸಂಚಾರಕ್ಕೆ ತೊಂದರೆಯಾಗುತ್ತಿದೆ. ಇದನ್ನು ಸರಿಪಡಿಸಿಕೊಡಬೇಕು ಎಂದು ಇದೆ ವೇಳೆ ಬೋತಗಿ ಗ್ರಾಮಸ್ಥರು ಶಾಸಕರಲ್ಲಿ ಮನವಿ ಮಾಡಿದರು. ಅತಿವೃಷ್ಠಿಯಿಂದಾದ ಹಾನಿಗೆ ಸಮರ್ಪಕ ಪರಿಹಾರ ನೀಡುವಂತೆ ಇದೆ ವೇಳೆ ವಿವಿಧ ಗ್ರಾಮಗಳ ಗ್ರಾಮಸ್ಥರು ಮನವಿ ಮಾಡಿದರು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಲಕ್ಷ್ಮಣ ಈಶ್ವರ ಬುಳ್ಳಾ, ಹುಮಾನಾಬಾದ್ ತಾಪಂ ಅಧ್ಯಕ್ಷ ರಮೇಶ ಡಾಕುಳಗಿ, ಉಪಾಧ್ಯಕ್ಷೆ ಸುಗಂಧಾ ಅಣ್ಣೆಪ್ಪ, ತಹಸೀಲ್ದಾರ ನಾಗಯ್ಯ ಹಿರೇಮಠ ಹಾಗೂ ಇತರರು ಇದ್ದರು.
Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ Facebook । Twitter । YouTube । Instagram ಅನುಸರಿಸಿ..