Gummata Nagari : Bagalkot News
ಕಲಾದಗಿ : ಗರ್ಭಿಣಿ, ಬಾಣಂತಿಯರು ಪೌಷ್ಟಿಕ ಆಹಾರ ಸೇವಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಂಗನವಾಡಿ ಮೇಲ್ವಿಚಾರಕಿ ಜೆ.ಬಿ. ನಿಡೋಣಿ ಹೇಳಿದರು.
ಸಮೀಪದ ಅಂಕಲಗಿ ಗ್ರಾಮದಲ್ಲಿ ರಾಷ್ಟ್ರೀಯ ಆರೋಗ್ಯ ಪೋಷಣಾ ಮಾಸಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು, ಸೊಪ್ಪು, ತರಕಾರಿ, ಹಣ್ಣುಗಳ ಜತೆ ಮೊಳಕೆ ಕಾಳು ಉಪಯೋಗಿಸುವ ಉತ್ತಮ ಆರೋಗ್ಯ ಹೊಂದಬೇಕು ಎಂದರು.
ಆರೋಗ್ಯ ಅಧಿಕಾರಿಗಳಾದ ಸಂಗಮೇಶ ಗೂಗಿಹಾಳ, ಯಶೋಧಾ ಜೋಗಿನ ಹಾಗೂ ಎ.ಎಸ್. ಸಾರಂಗಮಠ, ಎಲ್.ಎಂ. ಬಳೂಲದ ವಿ.ಬಿ. ಪಾಟೀಲ, ಸಪ್ನಾ ಕಂಬಾರ, ಪಿ.ಬಿ. ಕುರಿ, ಟಿ.ಬಿ. ಮಾಚಕನೂರ, ಆರ್.ವೈ. ಜೀರಗಾಳ, ಬಿ.ಎಚ್. ಹಿರೇಮಠ, ಹಾಗೂ ಅಂಕಲಗಿ ಲಕ್ಷ್ಮೀದೇವಿ ಸ್ತ್ರೀ ಶಕ್ತಿ ಸ್ವ ಸಹಾಯ ಸಂಘ, ಯಲ್ಲಮ್ಮ ದೇವಿ ಸ್ತ್ರೀ ಶಕ್ತಿ ಸ್ವ ಸಹಾಯ ಸಂಘ, ಮಹಾಲಕ್ಷ್ಮೀ ಸ್ತ್ರೀ ಶಕ್ತಿ ಸ್ವ ಸಹಾಯ ಸಂಘ, ಧನಲಕ್ಷ್ಮೀ ಸ್ತ್ರೀ ಶಕ್ತಿ ಸ್ವ ಸಹಾಯ ಸಂಘದ ಸದಸರು ಇದ್ದರು.
ಕಾರ್ಯಕ್ರಮದಲ್ಲಿ ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮ ನಡೆಯಿತು.
Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ Facebook । Twitter । YouTube । Instagram ಅನುಸರಿಸಿ..